July 23, 2025 4:16 am

ಭಾರತ ತಂಡದ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮ..

ದಶಕದ ತವಕ ಯಶಸ್ಸಿನಲ್ಲಿ ಅಂತ್ಯಗೊಂಡ ಕ್ಷಣ

ಟಿ20 ವಿಶ್ವಕಪ್ ಚಾಂಪಿಯನ್ನರಾಗಿದ್ದ ಭಾರತ ಕ್ರಿಕೆಟ್ ತಂಡವು ವಿಜಯೋತ್ಸವದ ಅಂಗವಾಗಿ ತೆರೆದ ಬಸ್ ಮೂಲಕ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಅಂದು (ಜುಲೈ 4) ಇನ್ನೂ ಮುಂಬೈನಲ್ಲಿ ಇಳಿದಿರಲಿಲ್ಲ. ವಿಮಾನ ಇಳಿಯುವ ಮೊದಲೇ ಕನಸಿನ ನಗರಿಯ ಮರೀನ್ ಲೈನ್ಸ್‌ನ ಅರಬೀ ಸಮುದ್ರದ ದಂಡೆಯುದ್ದಕ್ಕೂ ಜನಸಾಗರ ಸೇರಿತ್ತು. ಸಣ್ಣದಾಗಿ ಬರುತ್ತಿದ್ದ ಮಳೆ ಜನರ ಉತ್ಸಾಹ ಕುಂದಿಸಲಿಲ್ಲ. ಸುಮಾರು 13 ವರ್ಷಗಳಿಂದ ಭಾರತ ಕ್ರಿಕೆಟ್ ತಂಡ ಯಾವುದೇ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿರಲಿಲ್ಲ. ಈಗ ಆ ಕನಸು ಈಡೇರಿದ ಸಂಭ್ರಮ ಕಣ್ಣುಂಬಿಕೊಳ್ಳಲು ಎಲ್ಲರೂ ತವಕಿಸುತ್ತಿದ್ದರು. ‘ನಾವು ವಿಶ್ವಕಪ್ ಗೆಲ್ಲುವುದಕ್ಕೆ ದೇಶದ ಕ್ರಿಕೆಟ್ ಅಭಿಮಾನಿಗಳು ಎಷ್ಟೊಂದು ಆಸೆ, ಆಕಾಂಕ್ಷೆಯಿಂದ ಕಾಯುತ್ತಿದ್ದರು ಎಂದು ಈ ಜನಸಾಗರ ಕಂಡಾಗಲೇ ಅರ್ಥವಾಗುತ್ತದೆ’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದರಲ್ಲಿ ಉತ್ತೇಕ್ಷೆ ಇರಲಿಲ್ಲ.
ಅಲ್ಲಿಂದ ಅನತಿ ದೂರದ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡ ಎಂ.ಎಸ್.ಧೋನಿ ನಾಯಕತ್ವದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ರೋಡ್ ಶೋ ಬಳಿಕ ಸಮೀಪದ ಈ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಅದ್ಧೂರಿ ಸನ್ಮಾನ ನಡೆಯಿತು. ನಗದು ಬಹುಮಾನ
ನೀಡಲಾಯಿತು. ಕ್ರಿಕೆಟ್ ಆಟವನ್ನು ಧರ್ಮದ ರೀತಿ ಆರಾಧಿಸುವ ಭಾರತದಲ್ಲಿ ಈ ರೀತಿಯ ಅದ್ಧೂರಿ ಸ್ವಾಗತ. ಯಾರಿಗೂ ಅಚ್ಚರಿ ಮೂಡಿಸಲಿಲ್ಲ.
ಅದು ಭಾರತ ತಂಡಕ್ಕೆ ಸಾರ್ಥಕ ಕ್ಷಣ. ಭಾವನಾತ್ಮಕ ಕ್ಷಣವೂ ಸಹ, ಬಾರ್ಬಾಡೋಸ್‌ನಲ್ಲಿ ಜೂನ್ 29ರಂದು ಫೈನಲ್ ಪಂದ್ಯ ಗೆದ್ದ ತಕ್ಷಣ ಹಲವು ಆಟಗಾರರಿಗೆ ಭಾವನೆ ತಡೆಯಲಾಗಲಿಲ್ಲ. ಕೆಲವರಿಗೆ ಮಾತು ಹೊರಡಲಿಲ್ಲ. ಕೆಲವರ ಕಣ್ಣಾಲಿಗಳು ತುಂಬಿ ಬಂದಿದ್ದವು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ ಪ್ರೀತ್ ಬೂಮ್ರಾ ಮೊದಲಾದ ಆಟಗಾರರು ಭಾವುಕರಾಗಿದ್ದರು. ಈ ಸಂಭ್ರಮದ ನಡುವೆಯೇ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದರು. ಇದು ಕೂಡ ನಿರೀಕ್ಷಿತವೇ ಆಗಿತ್ತು. ಯುವ ಆಟಗಾರರಿಗೆ ಬೇಟನ್ ಹಸ್ತಾಂತರವಾಯಿತು.
ಭಾವನಾತ್ಮಕ ವಿದಾಯ:
ಆಟಗಾರನಾಗಿ ವಿಶ್ವಕಪ್ ಗೆಲ್ಲಲಾಗದಿದ್ದರೂ ರಾಹುಲ್ ದ್ರಾವಿಡ್ ಅವರು ತಂಡದ ಮುಖ್ಯ ತರಬೇತುದಾರನಾಗಿ ತಮ್ಮ ಕನಸನ್ನು ಈಡೇರಿಸಿಕೊಂಡರು. ಅದೂ ತರಬೇತುದಾರನಾಗಿ ತಮ್ಮ ಅವಧಿಯ ಕೊನೆಯ ದಿನ. ಸಮಚಿತ್ತ, ಶಿಸ್ತು, ಸಂಯಮಕ್ಕೆ ಹೆಸರಾದ ಕರ್ನಾಟಕದ ಈ ಕಲಾತ್ಮಕ ಹಿರಿಯ ಆಟಗಾರನಿಗೆ ತಂಡದ ಆಟಗಾರರು ಇದಕ್ಕಿಂತ ದೊಡ್ಡ ಉಡುಗೊರೆ ನೀಡಲು ಸಾಧ್ಯವಿರಲಿಲ್ಲ. ರಾಹುಲ್ ಅವರ ತರಬೇತಿಯಡಿಯಲ್ಲೇ ರಬೇತಿಯಡಿಯಲ್ಲೇ ಕಳೆದ ವರ್ಷದ (2023) ನವೆಂಬರ್‌ನಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು. ಅವರು ಕೋಚ್ ಆಗಿದ್ದಾಗಲೇ ಒಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಿತ್ತು. ಈಗ ತಮ್ಮ ಅವಧಿಯ ಕೊನೆಯಲ್ಲಿ ತಂಡ ಉನ್ನತ ಸಾಧನೆಗೈದಿರುವುದಕ್ಕಿಂತ ದೊಡ್ಡ ಸಂತಸ ಅವರಿಗೆ ಬೇರೆ ಇರಲಾರದು. ಫೈನಲ್ ನಂತರ ಪೆವಿಲಿಯನ್‌ನಲ್ಲಿ ತಂಡವನ್ನು ಉದ್ದೇಶಿಸಿ ವಿದಾಯದ ಮಾತುಗಳನ್ನಾಡುವಾಗ ಅವರು ಭಾವುಕರಾಗಿದ್ದರು. ‘ನಾನು ನಿರರ್ಗಳವಾಗಿ ಮಾತನಾಡಬಲ್ಲೆ. ಆದರೆ ಈಗ ಮಾತುಗಳು ಹೊರಡುತ್ತಿಲ್ಲ’ ಎಂದಿದ್ದರು.
ಗೆದ್ದ ತಂಡಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದ 125 ಕೋಟಿ ನಗದು ಬಹುಮಾನ ಹಂಚಿಕೆ ವೇಳೆ ದ್ರಾವಿಡ್ ಪಾಲಿಸಿದ ಮಾದರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಂಡಳಿ ಆಟಗಾರರಿಗೆ ನೀಡಿದಷ್ಟು ರೂ.5 ಕೋಟಿ ಬಹುಮಾನ ತಮಗೂ ಘೋಷಿಸಿದಾಗ ಅದನ್ನು ಪಡೆಯಲು ಅವರು ಒಪ್ಪಲಿಲ್ಲ. ಇತರೆ ನೆರವು ಸಿಬ್ಬಂದಿಗೆ ನೀಡುವಷ್ಟೇ ಮೊತ್ತ ರೂ. 2.5 ಕೋಟಿ ಮಾತ್ರ
ಸ್ವೀಕರಿಸುವುದಾಗಿ ವಿನಮ್ರವಾಗಿ ಹೇಳಿದರು.
ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಈ ತಂಡದ ಆಟಗಾರರ ನಡುವೆ ಒಳ್ಳೆಯ ಬಾಂಧವ್ಯವಿದ್ದುದು ಯಶಸ್ಸಿಗೆ ಸಹಕಾರಿಯಾಯಿತು. ವಿರಾಟ್ ಕೊಹ್ಲಿ ಬಹುತೇಕ ಪಂದ್ಯಗಳಲ್ಲಿ ವಿಫಲರಾದರೂ ಅವರ ಮೇಲಿನ ವಿಶ್ವಾಸವನ್ನು ನಾಯಕ ರೋಹಿತ್ ಹಾಗೂ ಕೋಚ್ ದ್ರಾವಿಡ್ ಕಳೆದುಕೊಳ್ಳಲಿಲ್ಲ. ಬಾರ್ಬಾಡೋಸ್‌ನ ಕೆನ್ಸಿಂಗ್‌ಟನ್ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲೂ ಇನಿಂಗ್ಸ್ ಆರಂಭಿಸಿದ ಕೊಹ್ಲಿ, ಸಕಾಲದಲ್ಲಿ ಆಕರ್ಷಕ ಆಟವಾಡಿದರು. ಇನ್ನೊಂದೆಡೆ ವಿಕೆಟ್‌ಗಳು ನಿಯಮಿತವಾಗಿ ಬಿದ್ದರೂ, ವಿಚಲಿರಾಗದೇ. 59 ಎಸೆತಗಳಲ್ಲಿ 76 ರನ್ ಗಳಿಸಿ ‘ಪಂದ್ಯದ ಪುರುಷೋತ್ತಮ’ರಾದರು.
ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟೈಕ್ ರೇಟ್ ಬಗ್ಗೆ ಅಪಸ್ವರದ ಮಾತುಗಳು ಈ ಮೊದಲೇ ಕೇಳಿಬಂದಿದ್ದವು. ಆದರೆ ತಂಡದ ಆಡಳಿತ ಅವರ ಬೆನ್ನಿಗೆ ನಿಂತಿತು. ಅವರು ಟೀಕಾಕಾರರ ಬಾಯಿ ಮುಚ್ಚಿಸಿದರು. ಹಾರ್ದಿಕ್ ಪಾಂಡ್ಯ ಅವರ ಮನಃಸ್ಥಿತಿಯೂ ಅಷ್ಟೇ. ಐಪಿಎಲ್‌ ಮುಂಬೈ ತಂಡದಲ್ಲಿ ಪಾಂಡ್ಯ ನಾಯಕತ್ವದಡಿ ರೋಹಿತ್ ಆಡಿದ್ದರು. ಆದರೆ ಇದರಿಂದ ಭಾರತ ತಂಡದ ಮೇಲೆ ಏನೂ ಪರಿಣಾಮವಾಗಲಿಲ್ಲ. ಮುಂಬೈನ ಯಾವ
ಕ್ರೀಡಾಂಗಣದಲ್ಲಿ ಕುಹಕದ ಮಾತುಗಳನ್ನೆದುರಿಸಿದರೆ, ಅಲ್ಲಿಯೇ ಅವರಿಗೆ ವಿಜಯೋತ್ಸವದ ದಿನ ಹರ್ಷೋದ್ಗಾರಗಳು ಹೆಚ್ಚಿನ ಪ್ರಮಾಣದಲ್ಲಿ ಕೇಳಿಬಂದಿದ್ದು ಗೊತ್ತೇ ಇದೆ.
ರೋಹಿತ್ ಸೆಮಿಫೈನಲ್ ಮತ್ತು ಅದಕ್ಕೆ ಹಿಂದಿನ ಪಂದ್ಯಗಳಲ್ಲಿ ಬಿರುಸಿನ ಅರ್ಧ ಶತಕ ಗಳಿಸಿದ್ದರು. ಆಲ್‌ರೌಂಡರ್ ಪಾತ್ರ ವಹಿಸಿದ ಅಕ್ಷರ್ ಪಟೇಲ್ ಬ್ಯಾಟರ್ ಪಾತ್ರದಲ್ಲಿ ಉಪಯುಕ್ತ ಆಟವಾಡಿದರು. ಕೆಲವು ಪಂದ್ಯಗಳಲ್ಲಿ ರಿಷಭ್ ಪಂತ್ ಅವರ ಕೊಡುಗೆ ಅಮೂಲ್ಯ, ಬ್ಯಾಟಿಂಗ್ ಜೊತೆಗೆ ಕೀಪಿಂಗ್‌ನಲ್ಲಿ ಅವರು ಚುರುಕುತನ ಎದ್ದುಕಂಡಿತು. ಭೀಕರ ಅಪಘಾತದಲ್ಲಿ ಗಾಯಗೊಂಡ ನಂತರ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಿದ ಅವರಿಗೆ ಇದಕ್ಕಿಂತ ಸಂತಸ ಬೇರೆ ಇರಲಿಕ್ಕಿಲ್ಲ. ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಮೇಲೆ ಇಟ್ಟ ಭರವಸೆಗೆ ತಕ್ಕ ಪ್ರದರ್ಶನ ನೀಡಲಿಲ್ಲ ಎನ್ನುವುದು ನಿಜ. ಮೂರು ಪಂದ್ಯಗಳಲ್ಲಿ ಮಾತ್ರ ಸೂರ್ಯ ಉಪಯುಕ್ತ ಕೊಡುಗೆಯ ಜೊತೆಗೆ ಆಗತ್ಯವಾಗಿದ್ದ ಜೊತೆಯಾಟದಲ್ಲಿ ಭಾಗಿಯಾದರು. ಫೈನಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಹಿಡಿದ ರೀತಿ ಮರೆಯಲಸಾಧ್ಯ. ಲಾಂಗ್ ಆಫ್ ಬೌಂಡರಿ ಬಳಿ ಸಿಕ್ಸರ್ ಆಗುವಂತೆ ಕಂಡಿದ್ದ ಚೆಂಡನ್ನು ತಡೆದು ಮೇಲಕ್ಕೆಸೆದು ಬೌಂಡರಿ ದಾಟಿ ಮತ್ತೆ ಒಳಕ್ಕೆ ಜಿಗಿದು.

ನಾಲ್ಕನೇ ವಿಶ್ವಕಪ್
ಭಾರತ ಕ್ರಿಕೆಟ್ ತಂಡಕ್ಕೆ ಇದು ವಿವಿಧ ಮಾದರಿಗಳಲ್ಲಿ ನಾಲ್ಕನೇ ವಿಶ್ವಕಪ್. 1983ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಮೂರನೇ ಏಕದಿನ ವಿಶ್ವಕಪ್ ಅನ್ನು ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಗೆದ್ದುಕೊಂಡಿತ್ತು. ಎರಡು ಬಾರಿ ವಿಜೇತರಾಗಿದ್ದ ವೆಸ್ಟ್ ಇಂಡೀಸ್ ಆ ಬಾರಿ ಫೈನಲ್‌ನಲ್ಲಿ ಸೋತಿತ್ತು.
2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಭಾರತ వండి, వింటో శివరా బ్యాటరా ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುಡಿಗೇರಿಸಿಕೊಂಡಿತ್ತು. 2011ರಲ್ಲಿ ಸ್ವದೇಶದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಎಂ.ಎಸ್.ಧೋನಿ ಸಾರಥ್ಯದ ಭಾರತ ತಂಡ, ನೆರೆಯ ಶ್ರೀಲಂಕಾ ತಂಡದ ಮೇಲೆ ಜಯಗಳಿಸಿ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು.
2013ರಲ್ಲಿ ಭಾರತ ಐಸಿಸಿ ಚಾಂಪಿ ಟ್ರೋಫಿ ಗೆದ್ದ ನಂತರ ಕ್ರಿಕೆಟ್‌ನ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಸಾಕಷ್ಟು ಬಾರಿ ತಂಡವು ಒಳ್ಳೆಯ ಪ್ರದರ್ಶನ ನೀಡಿ ಸೆಮಿಫೈನಲ್ ಮತ್ತು ಮೂರು ಬಾರಿ ಫೈನಲ್ ತಲುಪಿತ್ತು. ಈಗ ಐಸಿಸಿ ಪ್ರಶಸ್ತಿಗೆ 11 ವರ್ಷಗಳ ಕಾಯುವಿಕೆ ಟಿ20 ವಿಶ್ವಕಪ್ ಗೆಲುವಿನ ಮೂಲಕ ಅಂತ್ಯಗೊಂಡಿದೆ. ಅದ್ಭುತ ಕ್ಯಾಚ್ ಪೂರೈಸಿದರು. ಕ್ಯಾಚಸ್ ವಿನ್ಸ್ ಮ್ಯಾಚಸ್ ನುಡಿಗಟ್ಟಿಗೆ ಅದು ಪರಿಪೂರ್ಣ ನಿದರ್ಶನವಾಯಿತು.
ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಟೂರ್ನಿಯುದ್ದಕ್ಕೂ ತಂಡದ ಕೈಹಿಡಿದರು.

ಹೆಚ್ಚುಕಮ್ಮಿ ಪ್ರತಿ ಪಂದ್ಯದಲ್ಲಿ ಎಂಬಂತೆ ಅವರು ನಿರ್ಣಾಯಕ ಸಂದರ್ಭದಲ್ಲಿ ದಾಳಿಗಿಳಿದು ವಿಕೆಟ್‌ಗಳನ್ನು ಪಡೆದು ತಂಡ ಸೋಲದಂತೆ ನೋಡಿಕೊಂಡರು. ಫೈನಲ್ ಪಂದ್ಯವೂ (18ಕ್ಕೆ2) ಇದಕ್ಕೆ ಹೊರತಾಗಿರಲಿಲ್ಲ. 16 ಮತ್ತು 18ನೇ ಓವ‌ರ್ ಮಾಡಿದ್ದ ವೇಳೆ ಅವರು ಕೊಟ್ಟಿದ್ದು ಬರೇ ಆರು ರನ್‌ಗಳನ್ನಷ್ಟೇ. ಒಟ್ಟಾರೆ ಈ ಟೂರ್ನಿಯಲ್ಲಿ 15 ವಿಕೆಟ್‌ಗಳನ್ನು ಪಡೆದರು. ಸರಣಿಯ ಸರ್ವೋತ್ತಮ ಪ್ರಶಸ್ತಿಗೆ ಅವರಿಗಿಂತ ಪಪಂಕ್ತ ಆಟಗಾರ ಬೇರೆಯಾರೂ ಇರಲಿಲ್ಲ. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಕೂಡ ನಿರಾಸೆ ಮೂಡಿಸಲಿಲ್ಲ. ಫೈನಲ್‌ನಲ್ಲಿ ಅವರು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಗಳಿಸಿದ ರನ್‌ಗಳೂ ಅಮೂಲ್ಯವೆನಿಸಿದವು. ಇಲ್ಲೂ ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಅವರ ಜಾಣೆ ಕೆಲಸ ಮಾಡಿತು. ಎಡಗೈ-ಬಲಗೈ ಬ್ಯಾಟರ್‌ಗಳು ಆಡುವಂತೆ ಮಾಡಿ, ಬೌಲರ್‌ಗಳ ಲಯ ತಪ್ಪಿಸಲು ಅದು ತಂತ್ರವಾಗಿತ್ತು.
ಮೊದಲ ಬಾರಿ ಐಸಿಸಿ ಟೂರ್ನಿಯೊಂದರ ಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡ ಸೋತರೂ ಹೋರಾಟ ತೋರಿತು. ಐದು ಓವರ್ ಉಳಿದಿದ್ದಾಗ ಅದೂ ಮೊದಲ ಬಾರಿ ಪ್ರಶಸ್ತಿ ಗೆಲ್ಲುವಂತೆ ಕಂಡಿತ್ತು. 30 ಎಸೆತಗಳಲ್ಲಿ ಬೇಕಿದ್ದುದು 30 ರನ್. ಆರು ವಿಕೆಟ್‌ಗಳು ಉಳಿದಿದ್ದವು. ಆದರೆ ಒತ್ತಡಕ್ಕೆ ಸಿಲುಕಿ ಸೋಲುವ ‘ಜೋಕರ್ಸ್’ ಹಣೆಪಟ್ಟಿ ಕಳಚಿಕೊಳ್ಳಲು ಆ ತಂಡಕ್ಕೆ ಈ ಬಾರಿಯೂ ಸಾಧ್ಯವಾಗಲಿಲ್ಲ.
ಏನಿದ್ದರೂ ಟೂರ್ನಿಯ ಫೈನಲ್ ಪಂದ್ಯ ರೋಚಕವಾಗಿದ್ದು ಭಾರತ ಏಳು ರನ್‌ಗಳಿಂದ ಗೆದ್ದಿತು. ಆದರೆ ಸೆಮಿಫೈನಲ್ ಪಂದ್ಯಗಳು ಏಕಪಕ್ಷೀಯವಾಗಿದ್ದವು. ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಆಫ್ಘಾನಿಸ್ತಾನ ತಂಡದ ಮೇಲೆ ಜಯಗಳಿಸಿದರೆ, ಇನ್ನೊಂದು ಸೆಮಿಫೈನಲ್‌ನಲ್ಲಿ ಭಾರತ 68 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ನಿರೀಕ್ಷೆಗಿಂತ ಸುಲಭವಾಗಿ ಪರಾಭವಗೊಳಿಸಿತು.

LEAVE A REPLY

Please enter your comment!
Please enter your name here

Related Articles

TRENDING ARTICLES